ಈಗ ಕೂಟದ ಕಾರ್ಯಕಾರಿ ಸಮಿತಿಯ ಅವಿರತ
ಸಾಂಪ್ರದಾಯಿಕ ಪೂಜೆಯ ನಂತರ, ರತ್ನಾ ವಾಮನ ಮೂರ್ತಿ ಮತ್ತು ಡಾ.ಕಲ್ಬುರ್ಗಿ, ಡಾ. ಜಾಕೀ ಬ್ಲೂ , ನಟೇಶ್ ಮಾರಪ್ಪ, ಜೀತ್ ಸಚದೇವ್ ಅವರುಗಳು ಜ್ಯೋತಿ ಬೆಳಗುವುದರೊಂದಿಗೆ ಕಾರ್ಯಕ್ರಮ ಪ್ರಾರಂಭಿಸಲಾಯಿತು.
ಕನ್ನಡ ಕೂಟದ ಅಧ್ಯಕ್ಷ ರವಿ ಶಂಕರ್ ಅವರು ಎಲ್ಲರನ್ನು ಸ್ವಾಗತಿಸಿ ಸಾವಿರಾರು ಕನ್ನಡ ಪುಸ್ತಕಗಳು, ನಿಯತಕಾಲಿಕಗಳು ಮತ್ತು ಕನ್ನಡ ಚಲನಚಿತ್ರ
ಇದೊಂದು ಅವಿಸ್ಮರಣೀಯ ದಿನ ಎಂದು ಬಣ್ಣಿಸಿದ ಕಾರ್ಯದರ್ಶಿ ಪ್ರಕಾಶ್ ಬಿರಾದರ್ ಅವರು ಕೂಟದ ಚಟುವಟಿಕೆಗಳನ್ನು ವಿವರಿಸಿ ಸಂಸ್ಥಾಪಕರಾದ ದಿ. ಪ್ರಾಚಾರ್ಯ ವಾಮನ ಮೂರ್ತಿ, ಡಾ. ಲಿಂಗಪ್ಪ ಕಲ್ಬುರ್ಗಿ, ಭಾರತೀಯ ಸಮಾಜ, ಆಕ್ಲೆಂಡ್ ಇಂಡಿಯನ್ ಅಸೋಸಿಯೇಶನ್, ದಿ ಇಂಡಿಯನ್ ವೀಕೆಂಡರ್ ಸ್ಥಳೀಯ ಪತ್ರಿಕೆಯ ಮುಖ್ಯ ಸಂಪಾದಕ ದೇವ್ ನಾಡಕರ್ಣಿ, ಗ್ರಂಥಾಲಯಕ್ಕೆ ತಾತ್ಕಾಲಿಕವಾಗಿ ಆಶ್ರಯ ನೀಡಿ ನೆರವಾಗಿದ್ದ ನಟೇಶ್ ಮಾರಪ್ಪ ಮತ್ತು ಕೂಟದ ಬೆಳವಣಿಗೆಗೆ ಶ್ರಮಿಸುತ್ತಿರುವ ಎಲ್ಲರನ್ನು ವಂದಿಸಿದರು. ಉಪಾಧ್ಯಕ್ಷ ವಸಂತ ಕುಮಾರ್, ಕೂಟದ ಅನೇಕ ಹಿರಿಯ ಕಿರಿಯ ಸದಸ್ಯರುಗಳು ಮತ್ತು ಹಲವಾರು ಭಾರತೀಯ ಸಂಘ ಸಂಸ್ಥೆಗಳ ಸದಸ್ಯರು ಈ ಶುಭ ಸಂದರ್ಭದಲ್ಲಿ ಹಾಜರಿದ್ದರು.
ನ್ಯೂಜಿಲೆಂಡ್ ಕನ್ನಡ ಕೂಟದ ಬಗ್ಗೆ : ಈ ಸಂಸ್ಥೆ ಸಂಖ್ಯಾಬಲದಿಂದ ಚಿಕ್ಕದಾದರೂ ನ್ಯೂಜಿಲೆಂಡಿನ ಭಾರತೀಯ ಸಂಘ ಸಂಸ್ಥೆಗಳ ಪೈಕಿ ಅತ್ಯಂತ ಕ್ರಿಯಾಶಾಲಿ ಎಂದು ದೇವ್ ನಾಡಕರ್ಣಿ ಹೇಳಿದ ಮಾತು ಅತಿಶಯೋಕ್ತಿಯಲ್ಲ.
ಕನ್ನಡ ರಾಜ್ಯೋತ್ಸವ ಸೇರಿದಂತೆ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳು, ವಾರ್ಷಿಕ ಕ್ರೀಡಾ ದಿನ, ಬೇಸಗೆಯ ಪಿಕ್ನಿಕ್, ಕನ್ನಡ ಚಲನಚಿತ್ರ ಗೀತೆಗಳ ಅಂತಾಕ್ಷರಿ ಸ್ಪರ್ಧೆ, ಮಕ್ಕಳ ಕಾರ್ಯಕ್ರಮ, ತಿಂಗಳಿಗೊಂದು ಸಿನಿಮಾ, ಕನ್ನಡ ಶಾಲೆ, ಕೀವಿ ಕನ್ನಡಿಗ ಪತ್ರಿಕೆ, ಸ್ಥಳೀಯ ಭಾರತೀಯ ಅಂತರ ಭಾಷಾ ಕ್ರಿಕೆಟ್
No comments:
Post a Comment